Events
SADBHAVANA DIWAS
ದಿನಾಂ:20.08.2025ರಂದು ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸದ್ಭಾವನೆ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಪೂಜ್ಯ ಡಾ.ಬಸವಕುಮಾರ ಸ್ವಾಮೀಜಿಗಳು ಮಾತನಾಡಿ, ಚಿಕ್ಕ ವಿಚಾರ ಎಂದುಕೊಳ್ಳುವ ವಿಷಯಗಳು ದೊಡ್ಡ ಬದಲಾವಣೆ ತರುತ್ತವೆ. ದೊಡ್ಡ ವಿಚಾರ ಎಂದುಕೊಳ್ಳುವ ವಿಷಯಗಳು ಹಾದಿ ತಪ್ಪಿಸುತ್ತವೆ. ಸದ್ಭಾವನೆ ಎನ್ನುವುದು ಒಂದು ದಿನಕ್ಕೆ ಮೀಸಲಾಗಬಾರದು. ಅದು ನಿತ್ಯ ನಿರಂತರವಾಗಿ ನಮ್ಮ ಬದುಕಿನುದ್ದಕ್ಕೂ ಇರಬೇಕು. ಸದಾ ಸದ್ಭಾವಿಗಳಾಗಿರಬೇಕು. ವಿದ್ಯಾರ್ಥಿಗಳು ಸಣ್ಣ ಸಣ್ಣ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಗುರುಹಿರಿಯರನ್ನು ಮಮತೆಯಿಂದ