First Day of the Yoga, Health, and Spirituality Camp.

 

 

 

ಇಂದಿನಿಂದ ಆರಂಭಗೊಂಡ ಶರಣ ಸಂಸ್ಕೃತಿ ಉತ್ಸವ-2024ರ ನಿಮಿತ್ಯ, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಯೋಗಗುರು ವೈದ್ಯಶ್ರೀ  ಶ್ರೀ ಚನ್ನಬಸವಣ್ಣನವರ ಮಾರ್ಗದರ್ಶನದಲ್ಲಿ ಹತ್ತು ದಿನಗಳ ಯೋಗ-ಆರೋಗ್ಯ-ಅಧ್ಯಾತ್ಮ ಶಿಬಿರದ ಮೊದಲ ದಿನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಈ ಶಿಬಿರದಲ್ಲಿ ಭಾಗವಹಿಸಿದ ಯೋಗಪಟುಗಳು, ಎಸ್.ಜೆ.ಎಂ. ಸಂಸ್ಥೆಯ ಸಕಲ ನೌಕರ ವರ್ಗದವರು ಹಾಗೂ ಶ್ರೀಮಠದ ಸದ್ಭಕ್ತರು ಯೋಗದ ಮಹತ್ತ್ವವನ್ನು ಆನಂದಿಸಿದರು.

ಶಿಬಿರ ಆಯೋಜನೆಗೆ ಕಾರಣೀಭೂತರಾಗಿ ಸಕಲರಿಗೂ ಯೋಗಾರೋಗ್ಯದ ಭಾಗ್ಯ ಕರುಣಿಸಿದ ಪೂಜ್ಯರು  ಡಾ. ಶ್ರೀ ಬಸವಕುಮಾರ ಶ್ರೀಗಳಿಗೆ ಹಾಗೂ ಶಿಬಿರದಲ್ಲಿ ಭಾಗವಹಿಸಿದ್ದ ಅನೇಕ ಯೋಗ ಕೇಂದ್ರಗಳ ತರಬೇತುದಾರರು ಹಾಗೂ ಎಲ್ಲಾ ಯೋಗಪಟುಗಳಿಗೂ  ಹೃತ್ಪೂರ್ವಕ ಧನ್ಯವಾದಗಳು.

ಜಮೂರ ಕಲಾವಿದರಾದ ಶ್ರೀ ಉಮೇಶ್ ಪತ್ತಾರ್ ಮತ್ತು ಸಂಗಡಿಗರು ವಚನ ಗಾಯನದ ಮೂಲಕ ಶಿಬಿರಕ್ಕೆ ವಚನ ಗಾಯನದ ಮೂಲಕ ತಂಪೆರೆದರು.